
ಈ ಹಿಂದಿನ ಬರಹದ ಮುಂದುವರೆದ ಭಾಗ ಇದಾಗಿದೆ. ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.
8. ಹೊಯ್ಸಳರು :
(ಕ್ರಿ.ಶ. 1006 – 1336)
ರಾಜಧಾನಿ:
ದ್ವಾರಸಮುದ್ರ,
ಲಾಂಛನ: ಹುಲಿಯನ್ನು
ಸಂಹರಿಸುತ್ತಿರುವ ಸಳನ ಚಿತ್ರ
ಚಾಲುಕ್ಯರ ಪತನದ
ನಂತರ ಕರ್ನಾಟಕದಲ್ಲಿ ತಲೆ ಎತ್ತಿದವರು ಹೊಯ್ಸಳರು. ಈ ವಂಶದ ಸ್ಥಾಪಕ - ಸಳ. ಈತನಿಗೆ ‘ನೃಪಕಾಮ’ ಎಂಬ ಹೆಸರಿತ್ತು.
ನೃಪ ಎಂದರೆ ದೊರೆ ಎಂದರ್ಥ. ಈತನಿಗೆ ‘ಮಲೆಪರೊಳ್ ಗಂಡ’ ಎಂಬ ಬಿರುದಿತ್ತು.
ಇತರ ಅರಸರು :
ವಿನಯಾದಿತ್ಯ, ಎರೆಯಂಗ. ಈತನಿಗೆ ಮೂರು ಮಕ್ಕಳು - ಒಂದನೇ ಬಲ್ಲಾಳ, ವಿಷ್ಣುವರ್ಧನ, ಉದಯಾದಿತ್ಯ.
ಹೊಯ್ಸಳ ವಂಶದ
ಪ್ರಸಿದ್ಧದೊರೆ ವಿಷ್ಣುವರ್ಧನ (ಕ್ರಿ.ಶ. 1108-52)
ಈತನ ಮತ್ತೊಂದು
ಹೆಸರು ‘ಬಿಟ್ಟಿದೇವ’. ವಿಷ್ಣುವರ್ಧನನಿಗೆ
'ತಲಕಾಡುಗೊಂಡ', 'ಮಹಾಮಂಡಲೇಶ್ವರ', 'ಕಂಚಿಗೊಂಡ' ಮುಂತಾದ
ಬಿರುದುಗಳಿದ್ದವು. ಈತನ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣಗೊಂಡವು, ಕೀರ್ತಿನಾರಾಯಣ ದೇವಾಲಯ, ಬೇಲೂರಿನಲ್ಲಿ ಚೆನ್ನಕೇಶ್ವರ ದೇವಾಲಯ, ಕಪ್ಪೆ ಚೆನ್ನಿಗ, ಮೇಲುಕೋಟೆಯ ಚೆಲುವ ನಾರಾಯಣ, ಹಳೇಬೀಡಿನ
ಪಾರ್ಶ್ವನಾಥ ದೇವಾಲಯ, ಶ್ರವಣಬೆಳಗೊಳದ
ಜಿನನಾಥ ಬಸದಿ, ವಿಷ್ಣುವರ್ಧನನ
ಹಿರಿಯ ರಾಣಿ 'ಶಾಂತಲೆ' ನಾಟ್ಯರಾಣಿಯಾಗಿದ್ದಳು.
ಕೊನೆಯ ಅರಸರು:
ಒಂದನೇ ನರಸಿಂಹ, ಎರಡನೇ ಬಲ್ಲಾಳ,
ಎರಡನೇ ನರಸಿಂಹ, ಮೂರನೇ ನರಸಿಂಹ,
ಮೂರನೇ ಬಲ್ಲಾಳ, ನಾಲ್ಕನೇ ವೀರ ಬಲ್ಲಾಳ.
ನಾಲ್ಕನೇ ವೀರ
ಬಲ್ಲಾಳ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯವು ಮಲ್ಲಿಕಾಫರ್ ನ ದಾಳಿಗೆ ಸಿಕ್ಕಿ ಅವನತಿ ಕಂಡಿತು.
9. ವಿಜಯನಗರ
ಸಾಮ್ರಾಜ್ಯ: (ಕ್ರಿ.ಶ. 1336 - 1646)
ವಿಜಯನಗರ
ಸಾಮ್ರಾಜ್ಯದ ಸ್ಥಾಪನೆ ಭಾರತದ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ. ಕ್ರಿ.ಶ. 1336ರಲ್ಲಿ ಹಕ್ಕ - ಬುಕ್ಕ ಎಂಬ ಸಹೋದರರು ವಿದ್ಯಾರಣ್ಯ ಎಂಬ
ಗುರುಗಳ ಸಹಾಯದಿಂದ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು.
ಈ ಸಾಮ್ರಾಜ್ಯವನ್ನು
4 ಮನೆತನಗಳು ಆಳಿದವು.
1. 1) ಸಂಗಮವಂಶ (ಕ್ರಿ.ಶ.
1336-1485)
ಪ್ರಥಮ ಅರಸ -
ಹರಿಹರ
ಕೊನೆಯ ಅರಸ –
ಪ್ರೌಢರಾಯ. ಈತನಿಗೆ 'ಗಜಬೇಂಟೆಕಾರ'
ಎಂಬ ಬಿರುದಿತ್ತು. ಪರ್ಶಿಯಾದ ಅಬ್ದುಲ್ ರಜಾಕ್ ಭೇಟಿ ನೀಡಿದ್ದನು.
ಬುಕ್ಕರಾಯ - ಈತನ
ಕಾಲದಲ್ಲಿ ವೆನಿಷಿಯಾದಿಂದ ನಿಕೊಲೊ ಕೊಂಟಿ ಎಂಬ ಪ್ರವಾಸಿ ಭೇಟಿ ನೀಡಿದ್ದನು.
ಮೊದಲನೆಯ ಅರಸ -
ನರಸಿಂಹ
ಕೊನೆಯ ಅರಸ- 2ನೇ ನರಸಿಂಹ.
3. 3)ತುಳು ವಂಶ
(ಕ್ರಿ.ಶ. 1505 – 1570)
ಪ್ರಥಮ ಅರಸ - ದೀರ
ನರಸಿಂಹ ಪ್ರಸಿದ್ಧ ಅರಸ
ಪ್ರಸಿದ್ಧ ಅರಸ - ಕೃಷ್ಣದೇವರಾಯ
ಕೃಷ್ಣದೇವರಾಯ:- ಈತನ ಕಾಲವು
ಸುವರ್ಣಯುಗವಾಗಿತ್ತು. ಈತನು ಅನೇಕ ಕವಿಗಳಿಗೆ ಆಶ್ರಯ ನೀಡಿದ್ದನು. 'ಅಷ್ಟದಿಗ್ಗಜ'ರೆಂಬ ಎಂಟು ಕವಿಗಳು
ಈತನ ಆಸ್ಥಾನದಲ್ಲಿದ್ದರು. ಈತನು ರಾಜ್ಯವನ್ನು ವಿಸ್ತರಿಸಿ ಅನೇಕ ಮಂದಿರಗಳ ನಿರ್ಮಾಣ ಮಾಡಿಸಿದನು.
ಕೊನೆಯ ಅರಸ : ಸದಾಶಿವ
4. ಅರವೀಡು ವಂಶ
(ಕ್ರಿ.ಶ. 1543 - 1646)
ಪ್ರಥಮ ಅರಸ -
ತಿರುಮಲರಾಯ.
ಕೊನೆಯ ಅರಸ -
ಮೂರನೇ ಶ್ರೀರಂಗ
ವಿಜಯನಗರ
ಸಾಮ್ರಾಜ್ಯವು ತಾಳಿಕೋಟೆ ಯುದ್ಧ ( ರಕ್ಕಸತಂಗಡಿ) (1565) ದಲ್ಲಿ ಅವನತಿ ಕಂಡಿತು.
10. ಬಹುಮನಿ
ಸುಲ್ತಾನರು: (ಕ್ರಿ.ಶ. 1347 - 1527)
ಈ ಸಾಮ್ರಾಜ್ಯದ
ಸ್ಥಾಪಕ - ಅಲಾ-ಉದ್-ದೀನ್ ಹಸನ್ ಬಹಮನ್ ಷಾ.
ಇತರೆ ಅರಸರು : 1ನೇ ಮಹಮದ್ ಷಾ - ಜಾಮಿ ಮಸೀದಿಯನ್ನು ನಿರ್ಮಿಸಿದನು.
2ನೇ ಮಹಮದ್ ಷಾ -
ಈತನು ನ್ಯಾಯಾಧೀಶನಾಗಿದ್ದನು.
ಫಿರೋಜ್ ಷಾ - -
ಜ್ಯೋತಿರ್ವೀಕ್ಷಣಾಲಯವನ್ನು ನಿರ್ಮಿಸಿದನು.
ಅಹಮದ್ ಷಾ - ಈತನು
ತಕ್ತಮಹಲ್ ನ್ನು ನಿರ್ಮಿಸಿದನು.
2ನೇ ಅಲಾ-ಉದ್ ದಿನ್,
ಹುಮಾಯುನ್ ಮತ್ತು ಪ್ರಧಾನಮಂತ್ರಿ ಮಹಮದ್ ಗವಾನ್ -
ಈತನು ಬೀದರ್ನಲ್ಲಿ ಮದರೇಸಾ ಕಾಲೇಜನ್ನು ಕಟ್ಟಿಸಿದನು.
ಕೊನೆಯ ಅರಸ: ಖಲೀಂಮುಲ್ಲಾ ಈತನ ಕಾಲದಲ್ಲಿ ಬಹುಮನಿ ಸಾಮ್ರಾಜ್ಯವು ಐದು ರಾಜ್ಯಗಳಾಗಿ ವಿಭಾಗಗೊಂಡವು.
1. ಬೀದರ್ - ಇಮಾದ್
ಷಾಹಿ
2. ಅಹಮದ ನಗರ -
ನಿಜಾಂಶಾಹಿ
3. ಬಿಜಾಪುರ - ಆದಿಲ್
ಷಾಹಿ
4. ಗೋಲ್ಕೊಂಡ -
ಕುತುಬ್ ಷಾಹಿ
5. ಬೀದರ್ - ಬರೀದ್
ಷಾಹಿ
11. ಬಿಜಾಪುರದ ಆದಿಲ್
ಷಾಹಿ : (ಕ್ರಿ.ಶ. 1489 – 1686)
ಈ ವಂಶದ ಸ್ಥಾಪಕ:- ಯೂಸುಫ್ ಆದಿಲ್ ಷಾ
ಇತರ ಅರಸರು:
ಇಸ್ಮಾಯಿಲ್ ಆದಿಲ್ ಷಾ,
1ನೇ ಇಬ್ರಾಹಿಂ ಆದಿಲ್ ಷಾ,
1ನೇ ಆಲಿ ಆದಿಲ್ ಷಾ,
2ನೇ ಇಬ್ರಾಹಿಂ ಆದಿಲ್ ಷಾ, ಮಹಮದ್ ಆದಿಲ್ ಷಾ- ಈತನು 'ಗೋಲ್ ಗುಂಬಜ್' ನಿರ್ಮಿಸಿದನು, 2ನೇ ಆದಿಲ್ ಷಾ.
ಕೊನೆಯ ಅರಸ -
ಸಿಕಂದರ್ ಆದಿಲ್ ಷಾ.
12. ಮೈಸೂರು
ಒಡೆಯರು : (ಕ್ರಿ.ಶ. 1399 - 1947)
ಪ್ರಮುಖ ಅರಸರು:
ರಾಜ ಒಡೆಯರು: ಮೈಸೂರಿನಲ್ಲಿ ‘ಮಹಾನವಮಿ ಉತ್ಸವ' ಮೊದಲ ಬಾರಿಗೆ ಪ್ರಾರಂಭಿಸಿದರು.
ಚಾಮರಾಜ ಒಡೆಯರು,
ಎರಡನೆಯ ರಾಜ ಒಡೆಯರು, ಕಂಠೀರವ ನರಸರಾಜ ಒಡೆಯರು - ಇವರಿಗೆ 'ರಣಧೀರ' ಎಂಬ ಬಿರುದಿತ್ತು.
ದೊಡ್ಡ ದೇವರಾಜ
ಒಡೆಯರು - ಇವರಿಗೆ 'ಪರರಾಮ ಭಯಂಕರ'
ಎಂಬ ಬಿರುದಿತ್ತು. ಇವರು ಚಾಮುಂಡಿ ಬೆಟ್ಟಕ್ಕೆ
ಮೆಟ್ಟಿಲು ಹಾಕಿಸಿ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿದರು.
ಚಿಕ್ಕದೇವರಾಜ ಒಡೆಯ
: ಒಡೆಯ ಮನೆತನದಲ್ಲಿ ಪ್ರಸಿದ್ದರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರ ಕಾಲದಲ್ಲಿ ಅನೇಕ
ಕವಿಗಳು ಆಶ್ರಯವನ್ನು ಪಡೆದಿದ್ದರು. ಇವರಿಗೆ 'ನವಕೋಟಿ ನಾರಾಯಣ' ಎಂಬ ಬಿರುದಿತ್ತು.
2ನೇ ಕಂಠೀರವ ನರಸರಾಜ
: ಇವರು ಮೂಕರಾಗಿದ್ದರು. ಇವರ ಕಾಲದಲ್ಲಿ ಮೇಲುಕೋಟೆಯ ಬಿಂದು ಮಾಧವ ದೇವಾಲಯ ನಿರ್ಮಾಣವಾಯಿತು.
ದೊಡ್ಡ ಕೃಷ್ಣರಾಜ
ಒಡೆಯ, ಎರಡನೇ ಕೃಷ್ಣರಾಜ ಒಡೆಯರು-
ಇವರ ಕಾಲದಲ್ಲಿ 'ಹೈದರ್ ಆಲಿ'
ದಳವಾಯಿ ಹುದ್ದೆಗೆ ನೇಮಕಗೊಂಡನು. ಅನಂತರ ಈತನ ಮಗ
ಟಿಪ್ಪುಸುಲ್ತಾನ್ ಅಧಿಕಾರಕ್ಕೆ ಬಂದನು. ಈತನಿಗೆ 'ಮೈಸೂರಿನ ಹುಲಿ' ಎಂಬ ಬಿರುದಿತ್ತು. ಕ್ರಿ.ಶ. 1799 ರಲ್ಲಿ, ಟಿಪ್ಪು ಮರಣ ಹೊಂದಿದನು.
ಮುಮ್ಮಡಿ ಕೃಷ್ಣರಾಜ
ಒಡೆಯ, ಚಾಮರಾಜ ಒಡೆಯ, ನಾಲ್ವಡಿ ಕೃಷ್ಣರಾಜ ಒಡೆಯ,
ಕೊನೆಯ ಅರಸ-
ಜಯಚಾಮರಾಜೇಂದ್ರ ಒಡೆಯರು.
ಕ್ರಿ.ಶ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಮೈಸೂರು
ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು.
ಕರ್ನಾಟಕದ ಏಕೀಕರಣ
ಭಾರತದ
ಸ್ವಾತಂತ್ರ್ಯ ಸಂಗ್ರಾಮದ ನಂತರ ಹರಿದು ಹಂಚಿಹೋಗಿದ್ದ ಕನ್ನಡ ಭಾಷಾ ಪ್ರದೇಶಗಳನ್ನು ಒಗ್ಗೂಡಿಸಿ,
ಕರ್ನಾಟಕದ ಏಕೀಕರಣಕ್ಕಾಗಿ ಹಲವಾರು ರಾಜಕೀಯ ನಾಯಕರು, ಸಾಹಿತಿಗಳು, ಪತ್ರಕರ್ತರು ಹೋರಾಡಿದರು. ಇವರೆಲ್ಲರ ಪರಿಶ್ರಮದ ಫಲವಾಗಿ 1947ರಲ್ಲಿ ಐದು ಆಡಳಿತಗಳಿಗೆ ಅಂದರೆ ಮದ್ರಾಸ್, ಮುಂಬೈ ಪ್ರಾಂತಗಳು, ಕೊಡಗು, ಹೈದರಾಬಾದ್ ಮತ್ತು
ಮೈಸೂರು ಸಂಸ್ಥಾನದಲ್ಲಿದ್ದ ಪ್ರದೇಶಗಳು ಒಳಪಟ್ಟು ಬಳಿಕ 1956 ನವೆಂಬರ್ 1 ರಂದು ಕರ್ನಾಟಕವು
ಒಂದಾಯಿತು. ಆ ದಿನವನ್ನೇ ಕನ್ನಡಿಗರು ಪ್ರತೀವರ್ಷ ಕನ್ನಡ ರಾಜ್ಯೋತ್ಸವ ಎಂದು ಆಚರಿಸುತ್ತಾ
ಬಂದಿದ್ದಾರೆ.
ಹೀಗೆ ಬೆಳೆದು ಬಂದ
ಈ ಕನ್ನಡ ನಾಡಿಗೆ “ಕರ್ನಾಟಕ” ಎಂಬ ಹೆಸರನ್ನು 1973ರಲ್ಲಿ ಮುಖ್ಯಮಂತ್ರಿ ದೇವರಾಜ ಅರಸರ ಕಾಲದಲ್ಲಿ ನಾಮಕರಣ ಮಾಡಲಾಯಿತು.
ಹೀಗೆ ಕರ್ನಾಟಕಕ್ಕೆ
ಸುಮಾರು 2000 ವರ್ಷಗಳ
ಸುದೀರ್ಘವಾದ ಹಾಗೂ ಭವ್ಯವಾದ ಇತಿಹಾಸವಿದೆ. ಶಾಸ್ತ್ರಬದ್ಧ ಹಾಗೂ ವೈಜ್ಞಾನಿಕವಾಗಿ ರೂಪಿತವಾಗಿರುವ ಕನ್ನಡ ಭಾಷೆಗೆ
ತನ್ನದೇ ಆದ “ಲಿಪಿ' ಇದೆ. ಕನ್ನಡದ ಕವಿರಾಜ ಮಾರ್ಗ ಕೃತಿ ರಚಿತವಾದ
ಕಾಲದಲ್ಲಿ ಇಂಗ್ಲಿಷ್(ಆಂಗ್ಲಭಾಷೆ)
ತೊಟ್ಟಿಲಲ್ಲಿತ್ತು. ಹಿಂದಿ ಹುಟ್ಟಿರಲೇ ಇಲ್ಲ. ಕನ್ನಡವು ಒಂದು
ದ್ರಾವಿಡ ಭಾಷೆ. ಈ ಗುಂಪಿನಲ್ಲೇ ಇರುವ ಇತರ ಭಾಷೆಗಳೆಂದರೆ, ತಮಿಳು, ತೆಲುಗು, ಮಲೆಯಾಳಂ, ತುಳು, ಕೊಡಗು.....ಇತ್ಯಾದಿ.
ಹೀಗೆ ಕನ್ನಡ
ಭಾಷೆಯು ಸ್ವತಂತ್ರ ಭಾಷೆಯಾಗಿ ಬೆಳೆದು ಬಂದಿದ್ದರೂ, ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚಾಗಿರುವುದು ಕಂಡು ಬರುತ್ತದೆ. ಅಲ್ಲದೆ
ಕನ್ನಡ ಭಾಷೆಯ ಬೆಳವಣಿಗೆಯನ್ನು 3 ಭಾಗಗಳಾಗಿಸಿ
ಅಧ್ಯಯನ ಮಾಡಲಾಗುತ್ತದೆ.
(1) ಹಳಗನ್ನಡ
(2) ನಡುಗನ್ನಡ
(3) ಹೊಸಗನ್ನಡ
ಮೊದಲ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ.